ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಯ ಒತ್ತಾಯ ಅರ್ಥಹೀನ : ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಮೇ 31 , 2016
|
ಮೇ 31 , 2016
|
ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಯ ಒತ್ತಾಯ ಅರ್ಥಹೀನ : ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ
ಮಾರಣಕಟ್ಟೆ :
``ಹಿಂದೆ ಯಕ್ಷಗಾನವು ಜಾನಪದ ಅಕಾಡೆಮಿಯೊಂದಿಗೆ ವಿಲೀನವಾಗಿದ್ದು ಸದ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಎಂದು ಪ್ರತ್ಯೇಕ ಅಸ್ತಿತ್ವಹೊಂದಿದೆ. ಈಗ ಪುನಹ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಬೇಕು ಎಂಬ ಕೂಗು ಸಮಂಜಸವಲ್ಲ. ಸರಕಾರ ಪ್ರತಿಯೊಂದು ಕಲೆಗೂ ಹೀಗೆ ಅಕಾಡೆಮಿ ಸ್ಥಾಪಿಸುತ್ತಾ ಹೋಗುವುದು ಅಸಾದ್ಯ. ಇದರಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಬೀಳುವುದರೊಂದಿಗೆ ಮುಂದೊಂದು ದಿನ ತೆಂಕಿಗೆ ಬೇರೆ ಬಡಗುತಿಟ್ಟಿಗೆ ಬೇರೆ ಹೀಗೆ ಪ್ರತಿಯೊಂದು ತಿಟ್ಟಿಗೂ ಅಕಾಡೆಮಿ ಬೇಕು ಎಂಬ ಕೂಗು ಬರಬಹುದು`` ಎಂದು ಮಣಿಪಾಲ ಎಂ. ಐ. ಟಿ. ಪ್ರಾಧ್ಯಾಪಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ಕೊನೆಯ ದೇವರಸೇವೆ ಆಟದ ರಂಗಸ್ಥಳದಲ್ಲಿ ನಿವೃತ್ತ ಕಲಾವಿದರನ್ನು ಮೇಳದ ವತಿಯಿಂದ ಸನ್ಮಾನಿಸಿ ಮಾತನಾಡಿದರು. ``ಈಗಾಗಲೇ ಅಕಾಡೆಮಿಯಲ್ಲಿ ಪ್ರತಿಷ್ಟಿತ ಪಾರ್ತಿಸುಬ್ಬ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳಿದ್ದು, ಮುಂದೊಂದು ದಿನ ಪಾರ್ತಿಸುಬ್ಬ ಪ್ರಶಸ್ತ್ತಿಯಂತ ಪ್ರಶಸ್ತಿ ಪಡೆಯಲು ಅರ್ಹತೆ ಉಳ್ಳವರು ಸಿಗುವುದೇ ಕಷ್ಟಸಾದ್ಯವಾಗ ಬಹುದು`` ಎಂದು ಹೇಳಿದರು. ಶ್ರೀ ಕ್ಷೇತ್ರದ ಅನುವಂಶಿಕ ಮುಖ್ತೇಸರ ಸಿ. ಸೀತಾರಾಮ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ಹಿರಿಯ ಸ್ತ್ರೀ ವೇಷಧಾರಿ ಬೇಳಂಜೆ ಜಯಂತ ನಾಯಕ್. ಚೆಂಡೆವಾದಕ ಗೋಳಿಹೊಳೆ ಸದಾನಂದ ಪ್ರಭು, ಮೇಳದ ಸಿಬ್ಬಂದಿ ಮಂಜು ದೇವಾಡಿಗ ಇವರನ್ನು ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಕೆಂಚನೂರು ಶಂಕರ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ ಆಗಮಿಸಿದ್ದರು. ಚಿತ್ತೂರು ರಘುರಾಮ ಶೆಟ್ಟಿ ಸ್ವಾಗತಿಸಿ ಮಹಾಬಲ ಶೆಟ್ಟಿ ವಂದಿಸಿದರು. ಬಳಿಕ ಎರಡೂ ಮೇಳಗಳ ದೇವರಸೇವೆ ನಡೆಯಿತು. ಶೆಟ್ಟಿ, ಎಂ.ಬಿ. ಪುರಾಣಿಕ್, ಎ. ಸದಾನಂದ ಶೆಟ್ಟಿ, ಐಕಳ ಗಣೇಶ್, ಡಾ. ಸತೀಶ್ ಭಂಡಾರಿ, ಡಾ. ಪದ್ಮನಾಭ ಕಾಮತ್, ರವಿಶೆಟ್ಟ ಮೂಡಂಬೈಲು ಮತ್ತಿತರರು ಉಪಸ್ಥಿತರಿದ್ದರು.
|
|
|